aa

ಶ್ರೀ ಗವಿಸಿದ್ಧೇಶ್ವರ
ಜಾತ್ರಾ ಮಹೋತ್ಸವ 2025

ಮಹಾಮಹೀಮ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ 2025:

15-01-2025 ಬುಧವಾರ

ಸ್ಥಳ

ಶ್ರೀ ಗವಿಮಠದ ಆವರಣ

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2025ರ ನೇರ ಪ್ರಸಾರ


ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಿನ್ನಲೆ

ಶ್ರೀ ಜ ಗವಿಸಿದ್ಧೇಶ್ವರರು ಪರಂಪರೆಯಲ್ಲಿ ಹನ್ನೊಂದನೆಯವರು. ಪರಮ ಪೂಜ್ಯರು ಗುರುಗಳಿಗಾಗಿ ಸಿದ್ದ ಪಡಿಸಿದ ಸಮಾಧಿಯಲ್ಲಿ ತಾವೇ ಸಜೀವ ಸಮಾಧಿ ಹೊಂದಿ ಗುರು ಭಕ್ತಿಯ ಪರಾಕಾಷ್ಟತೆಯನ್ನು ಜಗಕ್ಕೆ ಸಾರಿದವರು. ಕ್ರಿ.ಶ 1816 ಶ್ರೀಮುಖ ಸಂವತ್ಸರ ಪುಷ್ಯ ಬಹುಳ ಬಿದಿಗೆಯಂದು ಪ್ರಾಣವನ್ನು ಬ್ರಹ್ಮ ಸ್ಥಾನಕ್ಕೇರಿಸಿ ನಿರ್ವಿಕಲ್ಪ ಸಮಾಧಿ ಸಂಯುತರಾದರು. ಅಂದಿನಿಂದಲೇ ಶ್ರೀ ಗವಿಸಿದ್ಧೇಶ್ವರರ ಮಹಾರಥೋತ್ಸವ ಜರುಗುತ್ತಿದೆ.

0
ವರ್ಷಗಳ
ಜಾತ್ರಾ ಐತಿಹ್ಯ
ಲಕ್ಷಾಂತರ
ಭಕ್ತಾಧಿಗಳ ಸಮಾಗಮ
0
ದಿನಗಳ ಕಾಲ ಲಕ್ಷಾಂತರ ಭಕ್ತಾಧಿಗಳಿಗೆ
ಭವ್ಯ ಮಹಾಪ್ರಸಾದ

ಶ್ರೀ ಗವಿಮಠ ಪರಂಪರೆ

   ಅನ್ನ, ಅಕ್ಷರ, ಅರಿವು, ಆರೋಗ್ಯ, ಅಧ್ಯಾತ್ಮ, ದಾಸೋಹದ ಪುಣ್ಯ ಕ್ಷೇತ್ರ ಶ್ರೀ ಗವಿಮಠ. ಶ್ರೀ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಶ್ರೀ ರುದ್ರಮುನಿ ಶಿವಯೋಗಿಗಳಿಂದ ಬೆಳಗಿದ ಶ್ರೀ ಗವಿಮಠದ ಜ್ಯೋತಿ 11ನೇ ಪೀಠಾಧಿಪತಿಗಳಾದ ಪರಮ ತಪಸ್ವಿ ಶ್ರೀ ಗವಿಸಿದ್ಧೇಶ್ವರರ ಕಾಲಕ್ಕೆ ಪ್ರಜ್ವಲವಾಗಿ ಬೆಳಗತೊಡಗಿತು.
ಕಲ್ಲಿನಡಿಯ ಕೈಲಾಸವಾಗಿರುವ ಶ್ರೀ ಗವಿಮಠದ ಆಧಾರ ಸ್ತಂಭಗಳೆರಡು, ಒಂದು ಶ್ರೀ ಮಠದ ಎಲ್ಲಾ ಪೂಜ್ಯ ಶಿವಯೋಗಿಗಳವರ ತಪ:ಶಕ್ತಿ ಇನ್ನೊಂದು ಸಧ್ಭಕ್ತರ ಭಕ್ತಿ.ಇದುವೇ ಗವಿಮಠದ ಭವ್ಯ ಪರಂಪರೆ

>>ಹೆಚ್ಚಿನ ಮಾಹಿತಿ

ಶ್ರೀ ಗವಿಸಿದ್ಧೇಶ್ವರರ ಗದ್ದುಗೆ

ಲಿಂ|| ಶ್ರೀ ಶಿವಶಾಂತವೀರ ಶಿವಯೋಗಿಗಳು

ಲಿಂ|| ಶ್ರೀ ಮರಿಶಾಂತವೀರ ಶಿವಯೋಗಿಗಳು

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಕುರಿತು ನಾಡಿನ ಗಣ್ಯರ ಅನಿಸಿಕೆಗಳು

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ವೈಶಿಷ್ಟತೆಗಳು

ಜಾತ್ರೆಯಲ್ಲಿ ಜಾಗೃತಿ ಯಾತ್ರೆ

ಜಾಗೃತಿ ಜಾಥಾ ಕಾರ್ಯಕ್ರಮಗಳ ಸಿಂಹಾವಲೋಕನ

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ. ಜಾತ್ರೆಗೆ ಬಂದು ಹೋಗುವುದರ ಜೊತೆಗೆ ಸಮಾಜಮುಖಿ ವಿಚಾರ ಹಾಗೂ ಜ್ವಲಂತ ಸಮಸ್ಯೆಗಳ ಹೋಗಲಾಡಿಸುವ ಬಗ್ಗೆ ಭಕ್ತರಲ್ಲಿ ಚಿಂತನೆಯನ್ನು ಮೂಡಿಸುವ ಪ್ರಯತ್ನದ ನಿಟ್ಟಿನಲ್ಲಿ ಪ್ರಾರಂಭವಾದ ಶ್ರೀಮಠದ ವಿನೂತನ ಪ್ರಯೋಗವೆ ಜಾಗೃತಿ ಜಾಥಾ ಕಾರ್ಯಕ್ರಮ. ಇದು ಭಕ್ತನು ಮಠಕ್ಕೆ ಬಂದರೆ ದೈವವೇ ಅವನ ಮನೆ-ಮನಗಳನ್ನು ತಲುಪುವ ಹೃದಯಸ್ಪರ್ಶಿ ಕಾರ್ಯಕ್ರಮವಾಗಿದೆ.

ವಿಡಿಯೋಗಳು

ಕೊಪ್ಪಳದ ಶ್ರೀ ಗವಿಮಠ ಜಾತ್ರಾ ಮಹೋತ್ಸವವು ವರ್ಷದಿಂದ ವರ್ಷಕ್ಕೆ, ವಿಭಿನ್ನತೆಯ ಮೂಲಕ ನಾಡಿನಾದ್ಯಂತ ಪ್ರಖ್ಯಾತಗೊಂಡಿದೆ. ಜಾತ್ರಯೆಂದರೆ, ಕೇವಲ ಜನ ಸೇರುವ ಧಾರ್ಮಿಕ ಉತ್ಸವವಲ್ಲ. ಅಲ್ಲಿ ಸಮಾಜಮುಖಿ ಸ್ಪಂದನೆಗಳಿರಬೇಕು. ವರ್ತಮಾನ ಜಾಗತಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಯೋಜನೆಗಳಿರಬೇಕು ಎಂಬುದನ್ನು ತಿಳಿಸುತ್ತಿರುವ ಗವಿಮಠದ ಕಾರ್ಯ ಮಾನವೀಕರಣಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಮೌಢ್ಯತೆಗಳ ವಿರುದ್ಧ ಕ್ರಾಂತಿಕಾರಕ ಚಳುವಳಿ ಸಾರುತ್ತಿರುವ ಕೊಪ್ಪಳ ಗವಿಮಠದ ಕಾರ್ಯ ಶ್ಲಾಘನೀಯ.

🔅ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮಹೋತ್ಸವ ಫೋಟೋ ಚಿತ್ರಣ ವಿಡಿಯೋಗಳು

ಸಾವಿರ ಸಾವಿರ ಬಡ ಮಕ್ಕಳಿಗೆ ಉಚಿತ ಪ್ರಸಾದ ನಿಲಯ, ನಿತ್ಯವೂ ಬರುವ ಭಕ್ತರಿಗೆ ನಿತ್ಯದಾಸೋಹದ ಜೋತೆಗೆ ಜಾತ್ರೆಯಲ್ಲಿ 15 ದಿನ ಲಕ್ಷಾಂತರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಶ್ರೀ ಮಠದ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ನಿರಂತರವಾಗಿ ಪ್ರಸಾದ ಜರುಗುವುದು ಪ್ರಸಾದ ನಿಲಯದ ವಿಸ್ತೀರ್ಣ ಸುಮಾರು ನಾಲ್ಕು ಎಕರೆ ( 2ಲಕ್ಷ ಚದುರ ಅಡಿ) ಯಷ್ಟು ಇದ್ದು ಅದರಲ್ಲಿ ಭವ್ಯವಾದ ಅಡುಗೆಮನೆ ಆಹಾರ ಸಂಗ್ರಹಣೆ ಕೊಠಡಿ ತರಕಾರಿ ಸಂಗ್ರಹಣೆ ಕೊಠಡಿ ಹಾಗೂ ಪ್ರಸಾದ ಸ್ವೀಕರಿಸಲು ವಿಶಾಲವಾದ ಸ್ಥಳಾವಕಾಶವಿದೆ.

ವಿಡಿಯೋಗಳು

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2024ರ ವಿಡಿಯೋ